ಟಿಕೆಟ್ ವಂಚಿತ ಅನಂತ ಕುಮಾರ್ ಹೆಗಡೆ ಭಾವುಕ ಪತ್ರ
March 25, 2024
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದ ಅಲ್ಲಿನ ಹಾಲಿ ಸಂಸದ ಅನಂತ ಕುಮಾರ್ ಹೆಗಡೆಯವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅನಂತ ಕುಮಾರ್ ಹೆಗಡೆಯವರು ಕ್ಷೇತ್ರದ ಮತದಾರರಿಗೆ ಭಾವುಕ ಪತ್ರವೊಂದನ್ನು ಬರೆದಿದ್ದಾರೆ. ಜನಸೇವೆಯಂಥ ಮಹಾ ಪೂಜೆಯ ಅವಕಾಶ ಸಿಕ್ಕಿದ್ದು ಪುಣ್ಯವೆಂದಿದ್ದಾರೆ. ಕಳೆದ 30 ವರ್ಷಗಳಿಂದ ಹಿಂದವೀ ಸೇವೆ ಮಾಡಿದ್ದಕ್ಕೆ ಸಾರ್ಥಕತೆಯಿದೆ ಎಂದು ಹೇಳಿದ್ದಾರೆ. ಜೊತೆಗೆ, ತಮ್ಮ ತಾಯಿಗೆ, ಕ್ಷೇತ್ರದ ಮತದಾರರಿಗೆ ಕೃತಜ್ಞತೆಯನ್ನು ತಿಳಿಸಿದ್ದಾರೆ. ಆದರೆ, ಅದರಲ್ಲಿ ಬಿಜೆಪಿಗೆ ಧನ್ಯವಾದ ಹೇಳಿಲ್ಲ ಎಂಬುದು ಗಮನಾರ್ಹ.
Tags
